ಕುಮಾರಸ್ವಾಮಿ ನಗುತ್ತಾ ಮಾತಾಡಿ ಬಿಜೆಪಿಗೆ ಕೊಟ್ರು ಶಾಕ್

ಗುರುವಾರ, 18 ಜುಲೈ 2019 (13:39 IST)

ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಕಲಾಪದಲ್ಲಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.

ಬಿಜೆಪಿಯವರು ಅಧಿಕಾರ ಬರಲು ಹಾಗೂ ಸರಕಾರ ರಚನೆ ಮಾಡೋಕೆ ಬಹಳ ಅರ್ಜೆಂಟ್ ನಲ್ಲಿದ್ದಾರೆ. ಇನ್ನು ರೆಬಲ್ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ಸ್ಪೀಕರ್ ಘನತೆಯನ್ನು ಹಾಗೂ ಅಧಿಕಾರ ಸ್ಥಾನದ ಬಗ್ಗೆ ಚರ್ಚೆಯಾಗುವಂತೆ ಮಾಡಿದ್ದಾರೆ ಎಂದ್ರು.

ಸಿಎಂ ಕುರ್ಚಿ ನನಗೇನೂ ಶಾಶ್ವತ ಅಲ್ಲ. ಗೂಟಾ ಹಾಕಿ ಕುಳಿತಿದ್ದೇವೆ ಎಂದು ನಾವು ಕನಸು ಕಾಣುತ್ತಿಲ್ಲ ಅಂತ ಸಿಎಂ ಹೇಳಿದ್ರು.

ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡಿದ್ದ ಸಂದರ್ಭ ಬೇರೆ ಇತ್ತು. ಈಗಿನ ಪರಿಸ್ಥಿತಿ ಬೇರೆ ಇದೆ. ಚರ್ಚೆ ಮಾಡದೇ ವಿಪಕ್ಷ ನಾಯಕರು ಆತುರ ತೋರುತ್ತಿದ್ದಾರೆ ಅಂತ ಹರಿಹಾಯ್ದರು.

ವಿರೋಧ ಪಕ್ಷಕ್ಕೆ ಮಾನ ಇಲ್ಲವೇ ಇಲ್ಲ. ಇಲ್ಲಿರೋರಿಗೆ ಅಲ್ವಸ್ವಲ್ಪ ಇದೆ ಅಂತ ವ್ಯಂಗ್ಯವಾಡಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ