ರೈತರಿಗೆ ಸಾಲಮನ್ನಾದ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿ ಆರಂಭಿಸಿದ ಕುಮಾರಸ್ವಾಮಿ

ಸೋಮವಾರ, 4 ನವೆಂಬರ್ 2019 (11:47 IST)
ಬೆಂಗಳೂರು : ರೈತರಿಗೆ ಸಾಲಮನ್ನಾದ ಬಗ್ಗೆ ಮಾಹಿತಿ ಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಬೆಳೆ ಸಾಲಮನ್ನಾ ಸಹಾಯವಾಣಿಯನ್ನು ಆರಂಭಿಸಿದ್ದಾರೆ.




ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿದ್ದ ವೇಳೆ ರಾಜ್ಯ ರೈತರ ಸಾಲಮನ್ನಾ ಮಾಡಿದ್ದರು. ಆದರೆ ಈಗಲೂ ರೈತರಲ್ಲಿ ಸಾಲಮನ್ನಾದ ಬಗ್ಗೆ ಗೊಂದಲವಿರುವುದರಿಂದ ಕುಮಾರಸ್ವಾಮಿ ಅವರ ಮನೆಬಾಗಿಲಿಗೆ ಬಂದು ಈ ಬಗ್ಗೆ  ವಿಚಾರಿಸುತ್ತಿದ್ದಾರೆ.


ರೈತರು ದೂರದಿಂದ ಬರುತ್ತಿರುವುದರಿಂದ ಅವರಿಗೆ ತೊಂದರೆಯಾಗುತ್ತಿರುವುದನ್ನು ಮನಗೊಂಡ ಕುಮಾರಸ್ವಾಮಿ ಅವರಿಗಾಗಿ ಸಾಲಮನ್ನಾ ಬಗ್ಗೆ ವಿಚಾರಿಸಲು ಸಹಾಯವಾಣಿಯನ್ನು ಆರಂಭಿಸಿದ್ದಾರೆ. ರೈತರು ತಮ್ಮ ಮನೆಯಿಂದಲ್ಲೇ 9164305868 ನಂಬರ್ ಗೆ ಬೆಳಿಗ್ಗೆ 10 ರಿಂದ 5ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದಾಗಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ