ಬಜೆಟ್ ಬಳಿಕ ರಾಜ್ಯ ಸರ್ಕಾರಕ್ಕೆ ಅನುದಾನದ ಕೊರತೆ

ಶನಿವಾರ, 7 ಮಾರ್ಚ್ 2020 (10:46 IST)
ಬೆಂಗಳೂರು : ಬಜೆಟ್ ಬಳಿಕ ರಾಜ್ಯ ಸರ್ಕಾರಕ್ಕೆ ಅನುದಾನದ ಕೊರತೆ ಉಂಟಾಗಿದ್ದು,  ಪೊಲೀಸರಿಗೆ ಸಂಬಳ ನೀಡಲೂ ಆಗದಷ್ಟು ಅನುದಾನ ಕೊರತೆಯಾಗಿದೆ ಎನ್ನಲಾಗಿದೆ.


ಅನುದಾನ ಇಲ್ಲದೇ ಸದ್ಯಕ್ಕೆ ಪೊಲೀಸರಿಗೆ ಸಂಬಳವಿಲ್ಲ. ಫೆಬ್ರವರಿ ತಿಂಗಳ ಸಂಬಳ ಕೊಡದಿರುವುದಕ್ಕೆ ಆಯುಕ್ತರ ವಿವರಣೆ ನೀಡಿದ್ದು, ಅನುದಾನದ ಕೊರತೆಯಿಂದ ಸಂಬಳ ವಿಳಂಬದ ಬಗ್ಗೆ ನೋಟಿಸ್ ನೀಡಿದ್ದಾರೆ.


ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ನೋಟಿಸ್ ನೀಡಿದ್ದು, ಡಿಸಿಪಿ, ಎಸಿಪಿ, ಮತ್ತು ಪಿಐಗಳಿಗೆ  ಸಭೆಗಳ ಮೂಲಕ ಸಿಬ್ಬಂದಿ ಗಮನಕ್ಕೆ ತರಲು ಫ್ಯಾಕ್ಸ್ ಸಂದೇಶದ ಮೂಲಕ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ