ರಾಯಚೂರಿನಲ್ಲಿ ಮತ್ತೆ, ಪ್ರತ್ಯಕ್ಷ

ಮಂಗಳವಾರ, 24 ಅಕ್ಟೋಬರ್ 2023 (18:01 IST)
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲಿಕಾರ್ಜುನ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಿದೆ.. ಯರಮಲದೊಡ್ಡಿ ಜಮೀನಿನಲ್ಲಿ ಕೃಷ್ಣ ಮೃಗವನ್ನು ಚಿರತೆ ಕೊಂದಿತ್ತು.
 
3 ದಿನಗಳ ಹಿಂದೆ ಕುರಿಯೊಂದನ್ನು ಕೊಂದಿತ್ತು. ಗ್ರಾಮಸ್ಥರು ಜಮೀನಿಗೆ ತೆರಳಲು ಭಯ ಪಡುತ್ತಿದ್ದಾರೆ.. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.. ಆದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮನುಷ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದಾಗ ಮಾತ್ರ ಚಿರತೆ ಸೆರೆಗೆ ಮುಂದಾಗುತ್ತೇವೆ. RFO ಸುರೇಶ್​​ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ