ಚಿರತೆ ಕಾಟ, ಜನರಿಗೆ ಪ್ರಾಣ ಸಂಕಟ

ಶುಕ್ರವಾರ, 12 ಆಗಸ್ಟ್ 2022 (19:51 IST)
ಬೆಳಗಾವಿ ಜಿಲ್ಲೆಯ ನಿರಂತರ ಮಳೆ ಅಷ್ಟೇ ಅಲ್ಲದೇ ಜನರಿಗೆ ಚಿರತೆಗಳ ಹಾವಳಿ ಸಹ ದೊಡ್ಡ ಸಂಕಟವನ್ನು ತಂದೊಡ್ಡಿದೆ.
ಜಿಲ್ಲೆಯ ಮೂರು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಿಗೆ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ  ಎಷ್ಟೇ ಪ್ರಯತ್ನ ಮಾಡಿದರೂ ಪತ್ತೆ ಆಗಿಲ್ಲ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದ 25 ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ನೂರಾರು ಸಿಬ್ಬಂದಿ, 20ಕ್ಕೂ ಹೆಚ್ಚು ಬೋನ್, ಟ್ರ್ಯಾಪ್ ಕ್ಯಾಮೆರಾ ಸೇರಿ ಅನೇಕ ರೀತಿಯಲ್ಲಿ ಪ್ರಯತ್ನ ಮಾಡಿದ್ರು ಚಿರತೆಗಳು ಮಾತ್ರ ಸಿಗುತ್ತಿಲ್ಲ. ಅರಣ್ಯ ಸಚಿವರ ಜಿಲ್ಲೆಯಲ್ಲಿ ಚಿರತೆಗಳು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರೋದು ಪ್ರಾಣ ಸಂಕಟ ತಂದೊಡ್ಡಿದೆ. 3 ಕಡೆಗಳಲ್ಲಿ ಡ್ರೋನ್ ಹಾರಿಸಿದ್ರು ಚಿರತೆ ಸೆರೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ