ಜುಗಾರಿ ಅಡ್ಡೆ ಮೇಲೆ ಮಿಂಚಿನ ದಾಳಿ

ಶನಿವಾರ, 1 ಜೂನ್ 2019 (17:32 IST)
ಜುಗಾರಿ ಅಡ್ಡೆ ಮೇಲೆ ಮಿಂಚಿನ ದಾಳಿ ನಡೆದಿದೆ.

ಜುಗಾರಿ ಅಡ್ಡೆ ಮೇಲೆ ಕಾರ್ಕಳ ಎ ಎಸ್ ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉಡುಪಿಯ ನಿಟ್ಟೂರು ಎಂಬಲ್ಲಿ ಜುಗಾರಿ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆದಿದ್ದು, 14 ಜೂಜುಕೋರರ ಬಂಧನ ಮಾಡಲಾಗಿದೆ.

ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಲಕ್ಷಾಂತರ ಮೌಲ್ಯದ ಸಂಪತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.

2 ಕಾರು, 5 ಬೈಕ್, 80 ಸಾವಿರ ನಗದು ವಶಕ್ಕೆ ಹಾಗೂ 16 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ