ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಹಾಗಿಲ್ಲ!

ಶುಕ್ರವಾರ, 14 ಮೇ 2021 (09:52 IST)
ಬೆಂಗಳೂರು: ಇಂದು ಅಕ್ಷಯ ತೃತೀಯ. ಇಂದು ಚಿನ್ನ ಖರೀದಿಸಿಟ್ಟುಕೊಂಡರೆ ಶುಭವಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಚಿನ್ನ ಖರೀದಿಸಲು ಕೊರೋನಾ, ಲಾಕ್ ಡೌನ್ ಅಡ್ಡಿಯಾಗಿದೆ.

 

ಲಾಕ್ ಡೌನ್ ಸಮಯಲ್ಲಿ ಚಿನ್ನದ ಅಂಗಡಿಗಳನ್ನು ತೆರೆಯಲು ಅನುಮತಿಯಿಲ್ಲ. ಇದು ಅಗತ್ಯ ಸೇವೆಯಲ್ಲ ಎಂಬ ಕಾರಣಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಚಿನ್ನದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿಲ್ಲ.

ಹೀಗಾಗಿ ಈ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದವರಿಗೆ ನಿರಾಸೆ ಕಾದಿದೆ. ಈ ಬಗ್ಗೆ ಜ್ಯುವೆಲ್ಲರಿ ಫೌಂಡೇಷನ್ ಕೋರಿದ್ದ ಮನವಿಯನ್ನು ಮುಖ್ಯಕಾರ್ಯದರ್ಶಿಗಳು ತಿರಸ್ಕರಿಸಿದ್ದಾರೆ. ಜನರ ಜೀವ ರಕ್ಷಣೆ ದೃಷ್ಟಿಯಿಂದ ಮನವಿ ತಿರಸ್ಕರಿಸಲಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ