ಚಂದ್ರ ಗ್ರಹಣದ ಹಿನ್ನಲೆ; ದೇವೇಗೌಡರಿಂದ ದೇವರಿಗೆ ಪೂಜೆ, ರೇವಣ್ಣರಿಂದ ಮಾಧ್ಯಮದವರಿಗೆ ಹಿಡಿಶಾಪ

ಬುಧವಾರ, 17 ಜುಲೈ 2019 (13:04 IST)
ಬೆಂಗಳೂರು : ಚಂದ್ರ ಗ್ರಹಣದ ಹಿನ್ನಲೆ ಗ್ರಹಣ ದೋಷ ನಿವಾರಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಶಂಕರ ಮಠದಲ್ಲಿ ಪೂಜೆ ಸಲ್ಲಿಸಿದ್ದಾರೆ.



ಶೃಂಗೇರಿ ಶಾರದಾಂಬೆ ಮಠದ ಶಾಖಾ ಮಠವಾದ ಬೆಂಗಳೂರಿನ ಶಂಕರಪುರಂ ನ ಶಂಕರ ಮಠದಲ್ಲಿ ಹೆಚ್.ಡಿ.ದೇವೆಗೌಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಹಾಗೇ  ಇಲ್ಲಿನ ಶಕ್ತಿ ದೇವತೆ ಈಶ್ವರಿಗೆ ಕೂಡ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಮಠದಲ್ಲಿ ಹೋಮ ಹವನವನ್ನು ಮಾಡಿಸುತ್ತಿದ್ದಾರೆ.

 

ಈ ಪೂಜೆಗೆ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಮೇಲೆ ರೇವಣ್ಣ ಗರಂ ಆಗಿದ್ದು, ಮಾಧ್ಯಮದವರಿಗೆ ಹಿಡಿ ಹಿಡಿಶಾಪ ಹಾಕಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ