ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿ ಹಾಗೂ ಕರ್ನಾಟಕ ಹೊತ್ತಿ ಉರಿಯುವ ಸಮಯದಲ್ಲೂ ಮಾಜಿ ಸಂಸದೆ ರಮ್ಯಾ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕನ್ನಡ ಚಲನಚಿತ್ರದ ಗಣ್ಯರು ಕೈಗೊಂಡಿದ್ದ ಹೋರಾಟದಲ್ಲೂ ರಮ್ಯಾ ಭಾಗಿಯಾಗದೇ, ತಮಗೂ ಹಾಗೂ ರಾಜ್ಯದ ಸಮಸ್ಯೆಗೂ ಸಂಬಂಧವೇ ಇಲ್ಲ ಎನ್ನುವಂತೆ ಮೌನ ವಹಿಸಿದ್ದರು. ಆದರೆ, ಇಗ ಫೇಸ್ಬುಕ್ನಲ್ಲಿ ಸ್ಟೇಟಸ್ ಶೇರ್ ಮಾಡುವ ಮೂಲಕ ಜನತೆಗೆ ಬಿಟ್ಟಿ ಸಲಹೆ ನೀಡಿದ್ದಾರೆ.