ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಕಚೇರಿಗೆ ಹೋಗಿದ್ಯಾಕೆ?

ಶನಿವಾರ, 8 ಜೂನ್ 2019 (16:38 IST)
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಾಣಿಸಿಕೊಂಡಿದ್ದಾರೆ.

ಮಂಡ್ಯ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಗೆದ್ದ ಮೇಲೆ ಕೃತಜ್ಞತೆ ಹೇಳುವ ಕಾರಣ ಭೇಟಿ ಮಾಡಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.

ಯಾರ್ಯಾರು ಸಪೋರ್ಟ್ ಮಾಡಿದ್ರೋ ಅವರೆಲ್ಲರಿಗೂ ಕೃತಜ್ಞತೆ ಹೇಳುತ್ತಿದ್ದೇನೆ. ಬಿಜೆಪಿಯವರು ನನ್ನ ಸಪೋರ್ಟ್ ಏನೂ ಕೇಳಿಲ್ಲ. ಧನ್ಯವಾದ ಹೇಳುವ ಕರ್ತವ್ಯ ಇತ್ತು, ಅದಕ್ಕೆ ಬಂದಿದ್ದೇನೆ ಎಂದರು.  

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ ಸಪೋರ್ಟ್ ಬೇಕಾಗಿದೆ. ಹಾಗಾಗಿ ಸಹಕಾರ ಕೇಳುವ ವಿಚಾರ ಮಾತಾಡಿದ್ದೇವೆ. ಬಿಜೆಪಿಯವರಿಗೆ ನನ್ನ ಬೆಂಬಲ ಕೇಳುವ ಪರಿಸ್ಥಿತಿ ಇಲ್ಲ, ಅವರೇ 303 ಜನ ಇದ್ದಾರೆ. ಬಿಜೆಪಿ ಸೇರ್ಪಡೆ ವಿಚಾರ ಈಗ ಏನೂ ಸನ್ನಿವೇಶ ಇಲ್ಲ, ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರ ಅಭಿಪ್ರಾಯ ಕೇಳುತ್ತೇನೆ. ಹೀಗಂತ ಸುಮಲತಾ ಅಂಬರೀಶ್ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ