ನನಗೆ ಹೇಮಾವತಿ ಜಲಾಶಯದ ಕೀ ಕೊಟ್ಟರೆ ನೀರುಗಂಟಿ ಕೆಲಸ ಮಾಡುತ್ತೇನೆ ಎಂದ ಬಿಜೆಪಿ ಸಂಸದ

ಶುಕ್ರವಾರ, 7 ಜೂನ್ 2019 (10:52 IST)
ತುಮಕೂರು : ಜಿಎಸ್ ಬಸವರಾಜು ಸಂಸದನಾಗುವುದಕ್ಕೆ ಅನ್ ಫಿಟ್ ಎಂದ ಸಚಿವ ರೇವಣ್ಣನ ಹೇಳಿಕೆಗೆ ಜಿಎಸ್ ಬಸವರಾಜು ತಿರುಗೇಟು ನೀಡಿದ್ದಾರೆ.




ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ರೇವಣ್ಣ ಗೆ ಅನ್ ಫಿಟ್ ಪದದ ಅರ್ಥವೇ ಗೊತ್ತಿಲ್ಲ. ನನಗೆ ಹೇಮಾವತಿ ಜಲಾಶಯದ ಕೀ ಕೊಟ್ಟರೆ ನೀರುಗಂಟಿ ಕೆಲಸ ಮಾಡುವುದಕ್ಕೂ ನಾನು ಸಿದ್ಧನಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.


ನೀರುಗಂಟಿ ಉತ್ತಮ ಕೆಲಸ ಅದಕ್ಕಿಂತ ಇನ್ನೇನು ಬೇಕು? ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಕೆಲಸ ಮಾಡಲ್ಲ. 17 ಟಿಎಂಸಿ ಬದಲು 45 ಟಿಎಂಸಿ ನೀರು ಬಳಸಿಕೊಂಡಿದ್ದಾರೆ. ಸಚಿವನಾಗಿ ಒಂದು ಕೆರೆ ತುಂಬಿಸುವ ಯೋಗ್ಯತೆಯೂ ಇಲ್ಲ ಎಂದು ರೇವಣ್ಣನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ