ಅಭಿವೃದ್ಧಿ ಮೂಲಕವೇ ಮಂಡ್ಯದಲ್ಲಿ ಗೆಲ್ಲಬೇಕು-ಸಿಪಿವೈ

ಸೋಮವಾರ, 28 ನವೆಂಬರ್ 2022 (16:43 IST)
ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಬೇಕಾದ್ರೆ, ಸರ್ಕಾರದ ಯಂತ್ರ ಕೆಲಸ ಮಾಡಬೇಕು ಅಂತಾ ಮಾಜಿ ಸಿಎಂ  ಕುಮಾರಸ್ವಾಮಿಗೆ ಎಂಎಲ್​​ಸಿ ಸಿ.ಪಿ.ಯೋಗೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಮಂಡ್ಯ ಭಾಗದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತು. ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಇರೋದ್ರಿಂದ ಕೊರತೆ ನೀಗಿದೆ. ಮಂಡ್ಯ ಭಾಗದಲ್ಲಿ ಬರೀ‌ ಭಾವನಾತ್ಮಕಕಾಗಿ ಗೆಲ್ಲೋಕೆ ಆಗಲ್ಲ, ಆದರೆ ಅಲ್ಲಿ ಅಭಿವೃದ್ಧಿ ಮೂಲಕ ಅಲ್ಲಿ ಗೆಲ್ಲಬೇಕು. ರಾಜಕೀಯ ಅಂದರೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಸರ್ಕಾರದ ಆಡಳಿತ ಯಂತ್ರ ಗಟ್ಡಿಯಾಗಿರಬೇಕು. ನಮ್ಮ ಸರ್ಕಾರದಲ್ಲಿ ವಿರೋಧ ಪಕ್ಷಗಳಿಗೆ ಹೆಚ್ಚು ಸಹಾಯ ಆಗುತ್ತದೆ. ಇದನ್ನು ನಾನು ಹಲವು ಬಾರಿ ಘಂಟಾಘೋಷವಾಗಿಯೇ ಹೇಳಿದ್ದೇನೆ. ಆದರೆ ನಮ್ಮ ಪಕ್ಷದ ಅಸ್ತಿತ್ವದ ಅನಿವಾರ್ಯತೆ ಇರೋದ್ರಿಂದ ನಮಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ವಿರೋಧಿ ಕುಮಾರಸ್ವಾಮಿ ವಿರುದ್ಧ ಸಿಪಿವೈ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ