ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಮಂಗಳೂರು ತಾ.ಪಂ. ಅಧ್ಯಕ್ಷರ ವಾಹನ ಸೀಜ್

ಶನಿವಾರ, 18 ಏಪ್ರಿಲ್ 2020 (10:30 IST)
ಚಿಕ್ಕಮಗಳೂರು : ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರ ವಾಹನವನ್ನು ಸೀಜ್ ಮಾಡಲಾಗಿದೆ.


ಮಂಗಳೂರಿನಲ್ಲಿ  ಕೊರೊನಾ ಕೇಸ್ ದಾಖಲಾದ ಹಿನ್ನಲೆಯಲ್ಲಿ ಮಂಗಳೂರು, ಚಿಕ್ಕಮಗಳೂರು ಜಿಲ್ಲಾ ಗಡಿ ಭಾಗಗಳನ್ನು ಬಂದ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ ಮಂಗಳೂರು ತಾ.ಪಂ. ಅಧ್ಯಕ್ಷ ಕೋಣಾಜೇಯ ಮಹಮ್ಮದ್ ಸೇರಿದಂತೆ ಮೂವರು ಸರ್ಕಾರಿ ವಾಹನದಲ್ಲಿ ಪ್ರಯಾಣ ಬೆಳೆಸಿದ್ದಲ್ಲದೇ ಚೆಕ್ ಪೋಸ್ಟ್ ಬಳಿ  ವಾಹನ ತಪಾಸಣೆಗೂ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಿದ್ದಾರೆ.

ಈ ಹಿನ್ನಲೆಯಲ್ಲಿ ನಿಯಮ ಉಲ್ಲಂಘಿಸಿದ ಅಧ್ಯಕ್ಷರ ವಾಹನವನ್ನು ಜಪ್ತಿ ಮಾಡಲಾಗಿದ್ದು, ತಾ.ಪಂ. ಅಧಯಕ್ಷ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ