ಪ್ರಿಯಾಂಕ್​ ಖರ್ಗೆ ವಿರುದ್ಧ ಮಣಿಕಂಠ​ ಕಿಡಿ

ಸೋಮವಾರ, 12 ಜೂನ್ 2023 (21:48 IST)
ಸಚಿವ ಪ್ರಿಯಾಂಕ್ ಖರ್ಗೆಗೆ ಅಭಿವೃದ್ಧಿ ವಿಚಾರದಲ್ಲಿ ಇಂಟ್ರೆಸ್ಟ್ ಇಲ್ಲ.. ಕೇವಲ ಟೀಕೆ ಟಿಪ್ಪಣಿ ಮಾಡೋದ್ರಲ್ಲಿ ಸಿಕ್ಕಾಪಟೆ ಆಸಕ್ತಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ಮುಖಂಡ ಮಣಿಕಂಠ್​ ರಾಠೋಡ್​ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರೋ ಫೇಕ್ ಆಡಿಯೋ ದೇಶದ ತುಂಬೆಲ್ಲ ವೈರಲ್ ಮಾಡಿಸಿದ್ರು.. ತನ್ನ ಮಗ ಸೋಲನ್ನ ಸಹಿಸಿಕೊಳ್ಳುವುದಿಲ್ಲ ಅಂತಾ ಫೇಕ್​​ ಆಡಿಯೋ ವೈರಲ್ ಮಾಡಿಸಿದ್ರು.. ಕಾಂಗ್ರೆಸ್ ಅಧಿಕಾರವಿರೋ ರಾಜ್ಯಗಳಲ್ಲಿ ನಾನು ಮಾತನಾಡಿದ್ದೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.. ನಮ್ಮ ರಾಜ್ಯ, ರಾಷ್ಟ್ರ ನಾಯಕರ ಬಗ್ಗೆ ಮಾತನಾಡೋ ನೈತಿಕತೆ ಪ್ರಿಯಾಂಕ್‌ಗಿಲ್ಲ.. ಅಧಿಕಾರಿಗಳನ್ನ ದುರುಪಯೋಗಪಡಿಸಿಕೊಂಡು ಪ್ರಿಯಾಂಕ್ ಖರ್ಗೆ ಗೆದ್ದಿದ್ದಾರೆ.. ಕಾಂಗ್ರೆಸ್‌ನ ಗ್ಯಾರಂಟಿಗಳು ಮುಂದಿನ ಬಾಗಿಲಿನಿಂದ ಫ್ರೀ ಫ್ರೀ ಹಿಂದಿನ ಬಾಗಿಲಿನಿಂದ ಬೆಲೆ ಏರಿಕೆ ಆಗುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ