ಬಿಬಿಎಂಪಿ ಚುನಾವಣೆ ನಡೆಸುವಂತೆ ಬೃಹತ್ ಉಪವಾಸ ಸತ್ಯಾಗ್ರಹ

ಮಂಗಳವಾರ, 6 ಡಿಸೆಂಬರ್ 2022 (19:44 IST)
ಪದೇಪದೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿರುವುದನ್ನು ಖಂಡಿಸಿ ಇಂದು ಫ್ರೀಡಂ ಪಾರ್ಕಿನಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ  ಬೃಹತ್ ಉಪವಾಸ ಸತ್ಯಾಗ್ರಹ ನಡೆಯಿತು  . ಬಿಬಿಎಂಪಿ ಚುನಾವಣೆ ನಡೆಸಿ ಬೆಂಗಳೂರು ಉಳಿಸಿ ಎಂಬ ಘೋಷಣೆ ಕೂಗುವು ಮೂಲಕ ಸರ್ಕಾರ ವಿರುದ್ದ ಆಮ್ ಆದ್ಮಿ ಪಾರ್ಟಿ  ಕಾರ್ಯಕರ್ತರು ಕಿಡಿಕಕಾರಿದರು . ಇನ್ನು ಇದೆ ಸಂದರ್ಭದಲ್ಲಿ ಮಾತನಾಡಿದ ಮೋಹನ್ ದಾಸ್  ಈ 40 % ಸರ್ಕಾರ ಚುನಾವಣೆ ನಡೆಸದೆ ಜನರಿಗೆ ಅತೀ ದೊಡ್ಡ ಅನ್ಯಾಯ ಮಾಡುತ್ತಿದೆ.  ಬೆಂಗಳೂರಿನ ಉಳಿವಿಗಾಗಿ ಚುನಾವಣೆ ನಡೆಯಲೇಬೇಕು ಸರ್ಕಾರ ಆದಷ್ಟು ಶೀಘ್ರ ಚುನಾವಣೆಯನ್ನು ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ  ನಡೆಸುತ್ತೇನೆ ಎಂದು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ