ಮಾಸ್ತಿಗುಡಿ ದುರಂತ: ಶರಣಾದ ನಾಗಶೇಖರ್, ರವಿ ವರ್ಮಾ

ಶನಿವಾರ, 12 ನವೆಂಬರ್ 2016 (12:47 IST)
ಅಪಾಯಕಾರಿ ಸ್ಟಂಟ್ ಮಾಡಿಸಿ ಇಬ್ಬರು ಖಳನಟರ ಸಾವಿಗೆ ಕಾರಣವಾದ ಆರೋಪವನ್ನೆದುರಿಸುತ್ತಿರುವ ಮಾಸ್ತಿಗುಡಿ ಸಿನಿಮಾದ ನಿರ್ದೇಶಕ ನಾಗಶೇಖರ, ಸಾಹಸ ನಿರ್ದೇಶಕ ರವಿ ವರ್ಮಾ ಮತ್ತು ಸಹ ನಿರ್ದೇಶಕ ಸಿದ್ದು ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಸಮಯದಲ್ಲಿ ಚಿತ್ರದ ನಾಯಕ ದುನಿಯಾ ವಿಜಿ ಕೂಡ ಉಪಸ್ಥಿತರಿದ್ದರು. 

ನಟರಿಬ್ಬರ ದುರಂತ ಸಾವಿಗೆ ಸಂಬಂಧಿಸಿದಂತೆ 5 ಜನರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ, ಸಾಹಸ ನಿರ್ದೇಶಕ ರವಿ ವರ್ಮಾ ಮತ್ತು ಸಹ ನಿರ್ದೇಶಕ ಸಿದ್ದು ಮತ್ತು ಯುನಿಟ್ ಮ್ಯಾನೇಜರ್ ಎಸ್. ಭರತ್ ಮತ್ತು ಇತರರ ವಿರುದ್ಧ  ಐಪಿಸಿ 304 (ಉದ್ದೇಶಪೂರ್ವಕವಲ್ಲದ ಹತ್ಯೆ)ಹಾಗೂ ಐಪಿಸಿ 188/34 (ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದ ಆರೋಪ) ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆಯುತ್ತಿದ್ದಂತೆ ನಾಗಶೇಖರ್, ರವಿವರ್ಮಾ ಮತ್ತು ಸಿದ್ದು ನಾಪತ್ತೆಯಾಗಿದ್ದರು. ಮತ್ತೀಗ ಘಟನೆ ನಡೆದ 5 ದಿನಗಳ ಬಳಿಕ ಅವರು ಪೊಲೀಸರಿಗೆ ಶರಣಾಗಿದ್ದಾರೆ. ನಿರ್ಮಾಪಕ ಸುಂದರ್ ಸದ್ಯ ರಾಮನಗರದ ಜೈಲಿನಲ್ಲಿದ್ದಾರೆ. 
 
ಕಳೆದ ಸೋಮವಾರ ಮಧ್ಯಾಹ್ನ ಬಹು ನಿರೀಕ್ಷಿತ ಸಿನಿಮಾ 'ಮಾಸ್ತಿಗುಡಿ'ಯ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೆಲಿಕಾಫ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಜಿಗಿದಿದ್ದ ಖಳನಟನಾದ ಅನಿಲ್ ಮತ್ತು ಉದಯ್ ನೀರುಪಾಲಾಗಿದ್ದರು. ಈ ಘಟನೆಗೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ