ನಾನು ಧನ್ಯ ಅಂತ ಸಚಿವ ಶ್ರೀರಾಮುಲು ಹೇಳಿದ್ಯಾಕೆ?

ಗುರುವಾರ, 22 ಆಗಸ್ಟ್ 2019 (19:27 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ ಬಳಿಕ ಬಿ.ಶ್ರೀರಾಮುಲು ಮೊದಲಿಗೆ ಇಲ್ಲಿಗೆ ಭೇಟಿ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಮಾಣಿಕಗಿರಿ ಕ್ಷೇತ್ರದ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಹಾಯೋಗಿನಿಯಾಗಿ ಈ ಭಾಗದ ದೇವರಾಗಿ ಜನತೆಗೆ ಹರಸುತ್ತಿದ್ದಾರೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ರು.

ಮಾಣಿಕಗಿರಿ ಅಮ್ಮನವರ ದರ್ಶನ ಪಡೆದು ಮಾತನಾಡಿದ ಅವರು, ನಾನು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಮ್ಮನವರ ದರ್ಶನಕ್ಕೆ ಬಂದಿದ್ದೇನೆ. ದೈವಾಂಶ ಸಂಭೂತರಾದ ಅಮ್ಮನವರ ದರ್ಶನ ಪಡೆದು ನಾನು ಧನ್ಯನಾಗಿದ್ದೇನೆ ಎಂದ್ರು.

ರಾಯಚೂರ ಲೋಕಸಭಾ ಸಂಸದ ರಾಜಾ ಅಮರೇಶ್ವರ ನಾಯಕ, ಸಚಿವ ಪ್ರಭು ಚೌವ್ಹಾಣ, ಯಾದಗಿರಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ , ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ  ಚಂದ್ರಶೇಖರ ಗೌಡ ಮಾಗನೂರು, ಮಾಜಿ ಶಾಸಕ ಮಲಕರೆಡ್ಡಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ  ಸೇರಿದಂತೆ ಲಲಿತಾ ಅನಪೂರ , ವೀಣಾ ಮೋದಿ , ಮೌಲಾಲಿ ಅನಪೂರ ಹಾಗೂ ಗುರುಮಠಕಲ್ ಘಟಕದ ಬಿಜೆಪಿ ಕಾರ್ಯಕರ್ತ ರು ಇದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ