ಹಿರಿಯ ಕಲಾವಿದೆಗೆ ಮೀ ಟೂ ಅನುಭವ

ಶುಕ್ರವಾರ, 16 ನವೆಂಬರ್ 2018 (14:26 IST)
ನನಗೂ ಮೀ ಟೂ ಅನುಭವಾಗಿದೆ. ಆದರೆ ನಾನು ಅದನ್ನ ಹೇಳಿಕೊಳ್ಳುತ್ತೇನೆ ಎಂದು ಹಿರಿಯ ಕಲಾವಿದೆ ಹೇಳಿಕೊಂಡಿದ್ದಾರೆ.

ತುಮಕೂರಿನಲ್ಲಿ ಬಿ.ಜಯಶ್ರೀ ಹೇಳಿಕೆ ನೀಡಿದ್ದು, ನನಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಅಲ್ಲ. ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗದಿರಲಿ ಅಂತಾ ಹೇಳುತ್ತಿದ್ದೇನೆ ಎಂದರು.

ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಎಂದು ಹೇಳುತ್ತೇನೆ. ಕೆಲವೊಮ್ಮೆ ನನ್ನ ಖಾಸಗಿ‌ವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ನನ್ನ ಪುಸ್ತಕ ಕಣ್ಣಮುಚ್ಚೆ ಕಾಡೆಗೂಡೆಯಲ್ಲಿ ಎಲ್ಲವನ್ನೂ ಬರೆದಿದ್ದೇನೆ. ಜನ್ಮ ಕೊಟ್ಟ ಮಗುವಿನ ತಂದೆ ಯಾರು ಅಂತಾ ತಾಯಿಗೆ ಮಾತ್ರ ಗೊತ್ತಾಗುತ್ತದೆ. ತಂದೆಗೆ ಗೊತ್ತಾಗಲ್ಲಾ. ಆ ನೋವನ್ನಾ ಹೇಳಿದ್ರೆ‌ ನೀವು ನಂಬಲ್ಲಾ.

ನೋವನ್ನು ಹೇಳಿಕೊಳ್ಳುವುದು ತಪ್ಪು ಎಂದು ದೇವರಾಣೆ ಹೇಳಲ್ಲಾ. ನೋವಾದವರಿಗೆ ‌ನಾವುಗಳು ಎಷ್ಟು‌ ಸಪೋರ್ಟ್ ಮಾಡುತ್ತೇವೆ ಅನ್ನೋದು ಮುಖ್ಯ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ