ಇಂದು ದೆಹಲಿಯಲ್ಲಿ ಪಕ್ಷ ಸಂಘಟನೆಗಾಗಿ ಸಭೆ : ಜಿ. ಪರಮೇಶ್ವರ್

ಬುಧವಾರ, 2 ಆಗಸ್ಟ್ 2023 (08:56 IST)
ಬೆಂಗಳೂರು : ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಯ ವಿಚಾರವಾಗಿ ಸಲಹೆ ಕೊಡಲು ಆಗಸ್ಟ್ 2ರಂದು ದೆಹಲಿಯಲ್ಲಿ ವರಿಷ್ಠರ ಸಭೆ ಇದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
 
ದೆಹಲಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಸಭೆಯ ಅಜೆಂಡಾ ಏನು ಅಂತ ನನಗೆ ಗೊತ್ತಿಲ್ಲ. ಸಹಜವಾಗಿ ಇಂತಹ ಸಭೆಗಳನ್ನ ಹಿಂದೆಯೂ ಮಾಡಿದ್ದಾರೆ.

ಹಿಂದೆ ಎಸ್.ಎಂ ಕೃಷ್ಣ ಅವರು ಸಿಎಂ ಇದ್ದಾಗ ನಾನು ಅವತ್ತು ಸಚಿವ ಆಗಿದ್ದಾಗಲೂ ಇಂತಹ ಸಭೆ ಮಾಡಿ ಜನಪರ ಆಡಳಿತ ಕೊಡೋಕೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಈ ಸಭೆಗೆ ಹಿಂದೆ ನಾವು ರಿಪೋರ್ಟ್ ಕೂಡಾ ಕೊಡ್ತಿದ್ದೇವು. ಲೋಕಸಭೆ, ಪಕ್ಷ ಸಂಘಟನೆ ವಿಚಾರ ಇರಬಹುದು ಅಂತಾ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ