ಆನ್ನಭಾಗ್ಯ ಯೋಜನೆ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಸಭೆ

ಶನಿವಾರ, 24 ಜೂನ್ 2023 (15:00 IST)
ಆನ್ನಭಾಗ್ಯ ಯೋಜನೆ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಮಧ್ಯಾಹ್ನ 3.30ಕ್ಕೆ ಮಹತ್ವದ ಸಭೆ ನಡೆಯಲಿದೆ.ಸಭೆಯಲ್ಲಿ ಅಹಾರ ಸಚಿವ ಮುನಿಯಪ್ಪ, ಸಿಎಎಸ್ ವಂದಿತಾ ಶರ್ಮಾ ಹಾಗೂ ಅಹಾರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಕೇಂದ್ರ ಸರ್ಕಾರ ಹೆಚ್ಚವರಿ ಅಕ್ಕಿ ವಿತರಣೆ ಮಾಡಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ಬಳಿಕ ಪರ್ಯಾಯ ವ್ಯವಸ್ಥೆಗಳು ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತೆ.ಯಾವ ರಾಜ್ಯದಿಂದ ಎಷ್ಟು ಪ್ರಮಾಣದಲ್ಲಿ ಅಕ್ಕಿ ಸಿಗಲಿದೆ..ಯಾವ ದರಲ್ಲಿ ಸಿಗಲಿದೆ..?NCCF, ನಾಫೆಡ್ (National agriculture co operative marketing federation), ಕೇಂದ್ರ ಬಂಡಾರ ಈ ಮೂರು ಏಜೆನ್ಸಿಗಳ  ಕೋಟೆಷನ್ ಕೇಳಲಾಗಿತ್ತು.ಆ ಏಜೆನ್ಸಿಗಳು ಕಳುಹಿಸಿರುವ ಕೋಟೆಷನ್ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ