ಸಚಿವ ಡಿಕೆಶಿವಕುಮಾರ್ BSY ಗೆ ಅಭಿನಂದಿಸಿದ್ದು ಏಕೆ?

ಭಾನುವಾರ, 10 ಫೆಬ್ರವರಿ 2019 (18:17 IST)
ಬಿ.ಎಸ್.ಯಡಿಯೂರಪ್ಪನವರಿಗೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆಗಳನ್ನು ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗುರುಮಿಠಕಲ್ ಶಾಸಕರ ಪುತ್ರನೊಂದಿಗೆ ನಡೆಸಿರುವ ಆಪರೇಷನ್ ಕಮಲದ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ. ಸತ್ಯವನ್ನು ಬಹಳ ದಿನಗಳವರೆಗೆ ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.

ಯಾರದೋ ಧ್ವನಿಯನ್ನು ಇನ್ಯಾರೋ ಮಿಮಿಕ್ರಿ ಮಾಡಲು ಬರುವುದಿಲ್ಲ ಎಂದ ಅವರು, ಸಿ.ಡಿ. ವಿಷಯದಲ್ಲಿ ಮುಂದಿನ ನಿರ್ಧಾರವನ್ನು ಸದನದಲ್ಲಿ ಸಭಾಧ್ಯಕ್ಷರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ