ಯಾವುದೇ ತಪ್ಪು ಮಾಡಿಲ್ಲ ಎಂದ ಸಚಿವ ಡಿಕೆಶಿ

ಭಾನುವಾರ, 16 ಸೆಪ್ಟಂಬರ್ 2018 (19:31 IST)
ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ರೂ ಅನಗತ್ಯವಾಗಿ ಹಿಂಸೆ ನೀಡಲಾಗುತ್ತಿದೆ. ಹೀಗಂತ ಸಚಿವ ಡಿ.ಕೆ.ಶಿವಕುಮಾರ ಹೇಳಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆ ಗಾಣಗಾಪೂರದ ದತ್ತಾತ್ರೇಯನ ಸನ್ನಿಧಿಯಲ್ಲಿ ಸಚಿವ ಡಿ.ಕೆ. ಶಿವಕುಮಾರ ಹೇಳಿಕೆ ನೀಡಿದ್ದಾರೆ.
ದತ್ತಾತ್ರೆಯ ದರ್ಶನಕ್ಕೆ ಬಹಳ ದಿನದಿಂದ ಬಯಸಿದ್ದೆ. ಇಂದು ದರ್ಶನ ಭಾಗ್ಯ ಈಡೇರಿದ್ದು, ದತ್ತನ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿದೆ. ನಾನು ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವ ಮನುಷ್ಯ. ದೇವರೆ ನ್ಯಾಯ ಕೊಡುತ್ತಾನೆ ಎನ್ನುವ ವಿಶ್ವಾಸವಿದೆ ಎಂದರು.

ಮೈತ್ರಿ ಸರಕಾರ ಕೆಡವಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಯೋಗೇಶ್ವರ ಮಾತ್ರವಲ್ಲ ಅಂತಹ ಹಲವು ಜನರು ಸಕ್ರಿಯರಾಗಿದ್ದಾರೆ. ಸಿದ್ರಾಮಯ್ಯ ಮಧ್ಯಪ್ರವೇಶದಿಂದ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ರಾಹುಲ್ ಗಾಂಧಿ ಆದೇಶದಿಂದ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ