ಸಂಕಷ್ಟ ಚತುರ್ಥಿ ಮಾಜಿ ಪ್ರಧಾನಿ ಕುಟುಂಬದಿಂದ ವಿಶೇಷ ಪೂಜೆ

ಮಂಗಳವಾರ, 31 ಜುಲೈ 2018 (17:04 IST)
ಸಂಕಷ್ಟ ಚತುರ್ಥಿ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದಿಂದ ಗಣಪತಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ.

ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆ ಗ್ರಾಮದಲ್ಲಿನ ಸಾಲಿಗ್ರಾಮ  ಏಕಶಿಲಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ, ಮಗ ಡಾ.ಸೂರಜ್ ರೇವಣ್ಣ, ಬಂಧುಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಭವಾನಿ ರೇವಣ್ಣ ಮತ್ತು ಮಗ ಡಾ.ಸೂರಜ್ ರೇವಣ್ಣ ಅವರು ಕೈಯಲ್ಲಿ ಕಳಸವಿಟ್ಟುಕೊಂಡು ದೇವಾಲಯ ಪ್ರದಕ್ಷಿಣೆ ನಡೆಯಿತು. ಕುರುಡುಮಲೆಯ ಗಣಪತಿಗೆ ಸಂಕಷ್ಟ ಚತುರ್ಥಿ ದಿನದಂದು ಪೂಜೆ ಸಲ್ಲಿಸಿದರೆ ಒಳ್ಳೆಯದು ಆಗುತ್ತದೆ ಅನ್ನೋ ನಂಬಿಕೆಯಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ