ಸಚಿವ ಆರ್ ಅಶೋಕ್ ನಡಗೆ ಕೈ ಪಡೆ ಕಿಡಿ

ಶುಕ್ರವಾರ, 11 ನವೆಂಬರ್ 2022 (19:09 IST)
ಕೆಂಪೇಗೌಡರ ಪುತ್ಥಳಿ ಅನಾವರಣದ ಬಳಿಕ ಫೋಟೋ ತೆಗೆದುಕೊಳ್ಳುವ ಸಮಯದಲ್ಲಿ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಪೋಸ್ ಕೊಟ್ಟ ಕಂದಾಯ ಸಚಿವ ಆರ್.ಅಶೋಕ ನಡೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿ ಕಾರಿದೆ ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವ ಘನತೆ ಇರುತ್ತೆ.ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳ ಆರ್.ಅಶೋಕ ಅವರಿಗೆ ಸದರ ಎನಿಸಿದ್ದಾರೆಯೇ..? ಶ್ರೀಗಳ ಮೇಲೆ ಕೈ ಹಾಕಿದ ಹಾಗೇ ಪ್ರಧಾನಿ ಮೋದಿ ಹೆಗಲ ಮೇಲೆ ಕೈ ಹಾಕಿವಷ್ಟು ಧೈರ್ಯವಿದೆಯೇ..? ಧರ್ಮ ,ಸಂಸ್ಕೃತಿ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.ಇನ್ನೂ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ ಹಿನ್ನಲೆ ಹಲವು ಪ್ರಶ್ನೆಗಳನ್ನು ಕೇಳಿ ಇವುಗಳಿಗೆ ಪ್ರಧಾನಿಗಳು ಉತ್ತರಿಸಬೇಕು ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ