ಸಚಿವ ರಮಾನಾಥ್ ರೈ ಆಪ್ತನ ಮೇಲೆ ಮಾರಣಾಂತಿಕ ಹಲ್ಲೆ

ಶುಕ್ರವಾರ, 11 ಮೇ 2018 (08:16 IST)
ಬಂಟ್ವಾಳ: ಚುನಾವಣೆಗೆ ಎರಡು ದಿನಗಳಿರುವಾಗ ಬಂಟ್ವಾಳ ಶಾಸಕ ರಮಾನಾಥ್ ರೈ ಆಪ್ತ ಸಂಜೀವ್ ಪೂಜಾರಿ ಮತ್ತು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿ ತಮ್ಮ ಕೆಲಸ ಮುಗಿಸಿ ಮನೆಗೆ ಬಂದು ಸ್ವಲ್ಪ ಹೊತ್ತಿನಲ್ಲೇ ಮನೆಯ ಹೊರಗೆ ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರನ್ನು ದುಷ್ಕರ್ಮಿಗಳು ಪುಡಿ ಮಾಡುತ್ತಿದ್ದರು.

ಅದನ್ನು ಸಂಜೀವ್ ಪೂಜಾರಿ ಪತ್ನಿ ಪ್ರಶ್ನಿಸಲು ಹೋದಾಗ ಅವರ ಮೇಲೂ ಹಲ್ಲೆ ನಡೆಸಿದರು. ಆಗ ಹೊರಗೆ ಬಂದ ಸಂಜೀವ್ ಪೂಜಾರಿ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಸಂಘ ಪರಿವಾರದ ಕೈವಾಡವಿದೆ. ದುಷ್ಕರ್ಮಿಗಳಲ್ಲಿ ಕೆಲವರು ನನಗೆ ಪರಿಚಯವಿದ್ದಾರೆ ಎಂದು ಸಂಜೀವ್ ಪೂಜಾರಿ ಆಪಾದಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ