ಒಂದೇ ತಿಂಗಳಲ್ಲಿ ಕೊರೊನಾ ಹೋಗುತ್ತೆ: ಭವಿಷ್ಯ ನುಡಿದ ಸಚಿವ

ಭಾನುವಾರ, 30 ಆಗಸ್ಟ್ 2020 (10:52 IST)
ಹೆಚ್ಚೆಂದರೆ ಇನ್ನೂ ಒಂದು ತಿಂಗಳಲ್ಲೇ ಕೊರೊನಾ ಹೋಗುತ್ತೆ ಎಂದು ಸಚಿವರೊಬ್ಬರು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ರಾಜ್ಯವು ಮುಂದಿನ ಒಂದು ತಿಂಗಳಲ್ಲಿ ಕೊರೊನಾ ಮುಕ್ತವಾಗಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಕೋವಿಡ್ – 19 ನಿಯಂತ್ರಣಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಲ್ಲಾ ಕ್ರಮ ಕೈಗೊಂಡಿದ್ದಾರೆ.

ಒಂದು ವೇಳೆ, ಬಿಜೆಪಿ ಅಲ್ಲದೇ ಬೇರೆ ಯಾವುದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೆ ಆಗ ಕೊರೊನಾ ನಿಯಂತ್ರಣಕ್ಕೆ ಅಷ್ಟು ಸುಲಭವಾಗಿ ಬರುತ್ತಿರಲಿಲ್ಲ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ