ಹೆಚ್.ಡಿ. ಕುಮಾರಸ್ವಾಮಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ

ಶುಕ್ರವಾರ, 18 ಅಕ್ಟೋಬರ್ 2019 (14:11 IST)
ಹೆಚ್.ಡಿ.ಕುಮಾರಸ್ವಾಮಿ ಹೆಸರಿನ ಕೆರೆಗೆ ಶಾಸಕರೊಬ್ಬರು ಬಾಗಿನ ಅರ್ಪಣೆ ಮಾಡಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ ಹೆಸರಿನ ಕೆರೆಗೆ ಶಾಸಕ ಬಾಲಕೃಷ್ಣರವರಿಂದ ಬಾಗಿನ ಅರ್ಪಣೆ ಮಾಡಲಾಗಿದೆ.

ಮಂಡ್ಯದ  ಸಂತೆಬಾಚಳ್ಳಿ ಹೋಬಳಿಯ ಅಳೆಹತ್ತಿಗುಪ್ಪೆ ಗ್ರಾಮದ ಕೆರೆಯು ತುಂಬಿ ಭರ್ತಿಯಾಗಿದೆ. ದಮ್ಮನಿಂಗಳ ಹಾಗೂ ಹಳೆಅತ್ತಿಗುಪ್ಪೆ ಗ್ರಾಮದ ಗ್ರಾಮಸ್ಥರು ಹಾಗೂ ದಾನಿಗಳಿಂದ ಕೆರೆಗೆ ನೀರು ತುಂಬಿಸಲಾಗಿದೆ.

ಬಾಗಿನ ಅರ್ಪಿಸಲು ಬಂದಿದ್ದ ಶಾಸಕ ಬಾಲಕೃಷ್ಣ ಅವರನ್ನು ತಮಟೆಯ ಸದ್ದಿನ ಮೂಲಕ ಪಟಾಕಿ ಸಿಡಿಸಿ ಹಾರಗಳನ್ನೂ ಹಾಕಿ ಮುಖಂಡರು ಬರಮಾಡಿಕೊಂಡ್ರು.

ನಂತರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದ್ರು. ಇದೇ ವೇಳೆ ಅಭಿಮಾನಿಗಳು ಹೆಚ್.ಡಿ. ಕೆ ಎಂಬ ಹೆಸರಿನ ಕೇಕ್ ಕತ್ತರಿಸಿ ಗಮನ ಸೆಳೆದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ