ಮೋದಿ ನಾಯಕತ್ವದ ಬಗ್ಗೆ ಸಂಗಣ್ಣ ಮಾತು

ಬುಧವಾರ, 11 ಮೇ 2022 (19:46 IST)
ಮೋದಿ ನಾಯಕತ್ವದಲ್ಲಿ ಚುನಾವಣೆ ಗೆಲ್ತೀವಿ ಅನ್ನೋದು ಮೂರ್ಖತನ ಎಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದಾರೆ..ಕಾರಟಗಿ ಪಟ್ಟಣದಲ್ಲಿ ನಡೆದಿದ್ದ ಜಿಲ್ಲಾ ಬಿಜೆಪಿ ‌ಕಾರ್ಯಕಾರಣಿಯಲ್ಲಿ ಮಾತನಾಡಿದ ಸಂಗಣ್ಣ ಕರಡಿ, ಯಾವುದೇ ಕಾರ್ಯಕ್ರಮ‌ ಇರಲಿ ರಾಷ್ಟ್ರೀಯ ನಾಯಕರ ಫೋಟೋ ಹಾಕ್ತಾರೆ..ಆದ್ರೆ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರ ನಾಯಕರ ಬ್ಯಾನರ್ ಹಾಕೋದು ಹುಚ್ಚುತನ..ಚುನಾವಣೆ ಗೆಲ್ಲೋದು ಅಷ್ಟು ಸುಲಭ ಇಲ್ಲ, ಅದಕ್ಕೆ ಅದರದ್ದೇ ಆದ ತಂತ್ರಗಾರಿಕೆ ಇದೆ ಎಂದ್ರು..ಸಂಸದ ಸಂಗಣ್ಣ ಕರಡಿ ಮಾತು ಕೇಳಿ ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಕಕ್ಕಾಬಿಕ್ಕಿಯಾದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ