ಮೋಹನ್​ ಕೃಷ್ಣ ಚಿತ್ತ JDSನತ್ತ

ಶನಿವಾರ, 15 ಏಪ್ರಿಲ್ 2023 (16:22 IST)
ಕೋಲಾರದ ಕೆಜಿಎಫ್​ನ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದೆ.. KGFನ ಬಿಜೆಪಿ ಟಿಕೆಟ್​​ ಅಶ್ವಿನಿ ಸಂಪಂಗಿಗೆ ದೊರೆತಿದ್ದು, ಟಿಕೆಟ್​ ವಂಚಿತ ಮೋಹನ್ ಕೃಷ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ.. ಒಂದು ಬಾರಿ ಸೋತಿರುವ ಅಶ್ವಿನಿಗೆ ಮತ್ತೊಂದು ಸಲ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಟಿಕೆಟ್​ ಆಕಾಂಕ್ಷಿಗಳಲ್ಲಿ ಆಕ್ರೋಶ ಸ್ಫೋಟಕ್ಕೆ ಕಾರಣವಾಗಿದೆ. ಸಂಸದ ಎಸ್.ಮುನಿಸ್ವಾಮಿ ಚಿತಾವಣೆಯಿಂದ ಟಿಕೆಟ್ ಕೈ ತಪ್ಪಿಸಲಾಗಿದೆ ಎಂದು ಟಿಕೆಟ್​ ಆಕಾಂಕ್ಷಿಗಳು ಆರೋಪಿಸಿದ್ದು, ಕಾಂಗ್ರೆಸ್​​ಗೆ ಪರೋಕ್ಷವಾಗಿ ನೆರವಾಗಲು ಅಶ್ವಿನಿಗೆ ಮತ್ತೊಂದು ಸಲ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಮೋಹನ್ ಕೃಷ್ಣ ಚಿತ್ತ JDSನತ್ತ ಹೊರಳಿದ್ದು, ಸ್ಥಳೀಯ ಮುಖಂಡ ಮುನಿರತ್ನಂನಾಯ್ಡು ಜೊತೆ ಜೆಡಿಎಸ್ ವರಿಷ್ಠರ ಭೇಟಿಗೆ ಮೋಹನ್ ಕೃಷ್ಣ ನಿರ್ಧಾರ ಮಾಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ