ಎಚ್ಚರ ಎಚ್ಚರ ಎಚ್ಚರ ...!!!! ದಿನದಿಂದ ದಿನಕ್ಕೆ ಹೆಚ್ಚುತ್ತದೆ ಮಂಕಿಪಾಕ್ಸ್ ಹಾವಳಿ ಜನರಿಗೆ ಎಚ್ಚರಿಕೆ...!!! ಟ್ವೀಟ್ ಮಾಡಿದ ಡಾ ಕೆ. ಸುಧಾಕರ್

ಶುಕ್ರವಾರ, 22 ಜುಲೈ 2022 (19:13 IST)
ದೇಶದಲ್ಲೇ ಮೊದಲ  ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿ ಇಡೀ  ದೇಶಕ್ಕೆ ನಡುಕ ಹುಟ್ಟಿಸಿತ್ತು...ಈಗ ದೇವರ ನಾಡು ಕೇರಳದಲ್ಲಿ ಮಂಕಿ ಪಾರ್ಕ್ ಹೆಚ್ಚಾಗುತ್ತಿದೆ ಎಂದು ವರದಿಗಳಾಗಿವೆ 
 
ನೆರೆಯ ಕೇರಳ ರಾಜ್ಯದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ‌ ರಾಜ್ಯ ಸರ್ಕಾರ ಹೈ ಅಲರ್ಟ್‌ ಆಗಿದ್ದು, ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಸರ್ವೇಕ್ಷಣಾ ಕ್ರಮಗಳ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.
 
ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಮಾಹಿತಿ ನೀಡಿದ್ದು, ' ನೆರೆಯ ಕೇರಳ ರಾಜ್ಯದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವೇಶ ಘಟ್ಟಗಳಲ್ಲಿ ತಪಾಸಣೆ, ಸೋಂಕು ದೃಢ ಪಟ್ಟವರ ಐಸೋಲೇಶನ್, ಹಾಸಿಗೆಗಳನ್ನು ಮೀಸಲಿಡುವುದು ಸೇರಿದಂತೆ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಸರ್ವೇಕ್ಷಣಾ ಕ್ರಮಗಳ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ' ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ