Kerala Monsoon: ರೈತರಿಗೆ ಮುಂಗಾರಿನ ಸಿಹಿ ಸುದ್ದಿ, ಕೇರಳಕ್ಕೆ ಎಂಟ್ರಿ ಕೊಟ್ಟ ವರುಣ
ಕರ್ನಾಟಕದಲ್ಲೂ ಇದೀಗ ಮೋಡ ಕವಿದ ವಾತಾವರಣವಿದ್ದು ಇಂದು ಸಂಜೆಯಿಂದ ಭಾರೀ ಮಳೆ ನಿರೀಕ್ಷಿಸಲಾಗಿದೆ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಮಳೆ ಇಷ್ಟು ಬೇಗನೇ ಆಗುತ್ತಿದೆ. ಅವಧಿಗಿಂತ 8 ದಿನಗಳ ಮೊದಲೇ ಮಳೆಯಾಗಿರುವುದು ವಿಶೇಷ.
ಈ ಬಾರಿ ಮುಂಗಾರು ಅತೀ ಶಕ್ತವಾಗಿ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದೆ. ಸೆಪ್ಟೆಂಬರ್ ವರೆಗೂ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಬೇಸಿಗೆ ಮಳೆಯೂ ಈ ಬಾರಿ ಉತ್ತಮವಾಗಿತ್ತು.