ವರದಕ್ಷಿಣೆ ಕಿರುಕುಳದಿಂದ ತಾಯಿ ಮಗು ಆತ್ಮಹತ್ಯೆ

ಶುಕ್ರವಾರ, 25 ಮಾರ್ಚ್ 2022 (12:13 IST)
ಚಿಕ್ಕಬಳ್ಳಾಪುರ : ವರದಕ್ಷಿಣೆ ಕಿರುಕುಳದ ಆರೋಪದಡಿ ತಾಯಿಯೊರ್ವಳು ತನ್ನ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 26 ವರ್ಷದ ನವಲತ ಹಾಗೂ ಅವರ 5 ವರ್ಷದ ಮಗ ಅಂಜನ್ ಕುಮಾರ್ ಮೃತರು. ನಿನ್ನೆ ಸಂಜೆ 6 ಗಂಟೆಗೆ ತೋಟದ ಕಡೆ ಹೋದವರು ಮನೆಗೆ ವಾಪಸ್ ಬಂದಿಲ್ಲ ಅಂತ ಹುಡುಕಾಡಿದಾಗ ತೋಟದ ಬಳಿಯ ಸಂಪಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತಳ ಸಂಬಂಧಿಕರು ದೂರು ದಾಖಲಿಸಿದ್ದಾರೆ. ತಮ್ಮ ಮಗಳಿಗೆ ಗಂಡ ಸೊಣ್ಣೇ ಗೌಡ, ಈತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರುಳಿ, ಚಂದ್ರು, ಗಾಯತ್ರಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಆರೋಪಿಸಿ ದೂರು ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ