ಉದ್ಯೋಗ ಸಿಗದ ಬೇಸರ: ಯುವಕ ನೇಣಿಗೆ ಶರಣು

ಗುರುವಾರ, 24 ಮಾರ್ಚ್ 2022 (09:40 IST)
ಬೆಂಗಳೂರು: ಉದ್ಯೋಗ ಸಿಗದ ಬೇಸರದಲ್ಲಿ ಯುವಕನೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ತುಮಕೂರು ಮೂಲದ 26 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಾತ. 15 ದಿನಗಳ ಹಿಂದೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಸ್ನೇಹಿತರ ಜೊತೆ ರೂಂನಲ್ಲಿದ್ದ. ಆದರೆ ಎಷ್ಟೇ ಹುಡುಕಿದರೂ ಉದ್ಯೋಗ ಸಿಗಲಿಲ್ಲ.

ಇದರಿಂದ ಬೇಸತ್ತಿದ್ದ ಯುವಕ ಸ್ನೇಹಿತರ ಕೊಠಡಿಯಲ್ಲಿ ಯಾರೂ ಇಲ್ಲದೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ