ಅಕ್ರಮ ಮತದಾರರ ಹೆಸರು ಸೇರ್ಪಡೆಯ ವಿರುದ್ಧ ದೂರು ಸಲ್ಲಿಸಿದ ಸಂಸದ ಡಿಕೆ ಸುರೇಶ್

ಬುಧವಾರ, 7 ಡಿಸೆಂಬರ್ 2022 (14:32 IST)
ರಾಜರಾಜೇಶ್ವರಿ ನಗರದ ಹಾಲಿ ಶಾಸಕ ಮುನಿರತ್ನ ವಿರುದ್ಧ ಡಿಕೆ ಸುರೇಶ್ ದೂರು ನೀಡಿದ್ದು,ಕಾಂಗ್ರೆಸ್ ಪ್ರಾಬಲ್ಯ ವಾರ್ಡ್ ಗಳಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಿರುವ ಆರೋಪ‌ ವರೆಸಿದ್ದಾರೆ.ಆಂಧ್ರ ಮೂಲದ ಜನರನ್ನು ಅಕ್ರಮವಾಗಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಸುಮಾರು 30 ಸಾವಿರ ಜನರ ಅಕ್ರಮ ಸೇರ್ಪಡೆಯ ವಿರುದ್ಧ ಡಿಕೆ ಸುರೇಶ್ ಆರೋಪ ಮಾಡಿದ್ದು,ಹೀಗಾಗಿ ಹಿರಿಯ ಅಧಿಕಾರಿಗಳನ್ನು ಕರೆಸಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಭೆ ನಡೆಸಿದ್ದಾರೆ.
 
ಬಿಬಿಎಂಪಿ ಚುನಾವಣಾ ಆಯುಕ್ತ ಉಜ್ವಲ್ ಕುಮಾರ್ & ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಜೊತೆ ಸಭೆ ನಡೆಸಿದ್ದು,ಮತದಾರರ ಪಟ್ಟಿ ಅಕ್ರಮ ಕುರಿತು ಸುದೀರ್ಘ ಮಾಹಿತಿ  ಸಂಸದ ಡಿಕೆ ಸುರೇಶ್ ನೀಡಿದ್ದಾರೆ.ಬಿಜೆಪಿ ಪರ ವೋಟ್ ಮಾಡಲು ಆಂಧ್ರ ಜನರ ಹೆಸರು ಸೇರ್ಪಡೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ