ಏನೂ ಕೇಳಬೇಡಿ ಎಂದು ಮಾಧ್ಯಮದವರಿಗೆ ಕೈಮುಗಿದ ಎಂಟಿಬಿ

ಶುಕ್ರವಾರ, 22 ನವೆಂಬರ್ 2019 (11:03 IST)
ಬೆಂಗಳೂರು : ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮಾಧ್ಯಮದವರು ಏನೇ ಕೇಳಿದರೂ ಒಂದಕ್ಕೂ ಉತ್ತರಿಸದೆ ಮಾಧ್ಯಮಗಳಿಗೆ ಕೈಮುಗಿದು ಹೊರಟ ಘಟನೆ ಇಂದು ನಡೆದಿದೆ.



ಈ ಹಿಂದೆ ಅನೇಕ ಬಾರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಇತರ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಎಂಟಿಬಿ ನಾಗರಾಜ್ ಇಂದು ಮಾಧ್ಯಮದವರ ಜೊತೆ ಮಾತನಾಡದೇ ನನ್ನನ್ನು ಏನೂ ಕೇಳಬೇಡಿ, ನಾನು ಏನೂ ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ಕೈಮುಗಿದು ಹೊರಟು ಹೋಗಿದ್ದಾರೆ ಎನ್ನಲಾಗಿದೆ.

 

ಎಂಟಿಬಿ ನಾಗರಾಜ್ ಅವರ ಈ ನಡೆಯನ್ನು ಗಮನಿಸಿದರೆ ಅವರ ಹೇಳಿಕೆಗಳು ಪದೇ ಪದೇ ವಿವಾದಕ್ಕೀಡಾದ ಹಿನ್ನಲೆ ಎಲ್ಲೂ ಹೇಳಿಕೆ ನೀಡದೆ  ಸುಮ್ಮನಿರುವಂತೆ ಹೈಕಮಾಂಡ್ ನಿಂದ ಸೂಚನೆ  ಸಿಕ್ಕಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ