ಕಾಂಗ್ರೆಸ್ ವಿರುದ್ಧ ಮುನಿರತ್ನ ವಾಗ್ದಾಳಿ

ಬುಧವಾರ, 11 ಅಕ್ಟೋಬರ್ 2023 (17:47 IST)
ನಗರದಲ್ಲಿ ಶಾಸಕ ಮುನಿರತ್ನ ಬೆಂಗಳೂರು ದಕ್ಷಿಣ ವಿಧಾನಸಭಾ  ಕ್ಷೇತ್ರದಲ್ಲಿ ಸೋತಿರುವ ಅಭ್ಯರ್ಥಿ ಹೆಸರು ಯಾರೆಂದು ಗೊತ್ತಿದ್ಯಾ.? ಎಂದು ಪ್ರಶ್ನಿಸಿದ್ದಾರೆ.ಅವರು ಕೇಳುದ್ರೆ ಯಾವ ಕೆಲಸ ಆಗಲ್ಲ.ಆದ್ರೆ ಆರ್ ಆರ್ ನಗರ ಕ್ಷೇತ್ರದಲ್ಲಿ ಸೋತಿರುವ ಅಭ್ಯರ್ಥಿ ಏನೇ ಹೇಳಿದ್ರು ಆಗೋಗುತ್ತೆ.ಕ್ಷೇತ್ರದಲ್ಲಿ ಮನೆ ಕಟ್ಟಲು ಪ್ಲಾನ್ ಸ್ಯಾಂಕ್ಷನ್‌ಗೆ ಇವರ ಅನುಮತಿಬೇಕು.ಮನೆ ಕಟ್ಟೋದಕ್ಕೆ ತಡೆ ಹಿಡಿಯುತ್ತಾರೆ,ಬಂದು ಮಾತನಾಡಿ ಆಮೇಲೆ ಮಾತನಾಡಿ ಎಂದು ವಾರ್ನಿಂಗ್ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
 
ನನ್ನ ಧರಣಿಗೆ ಅನೇಕ ಮುಖಂಡರು ಸಾಥ್ ನೀಡಿದರು,ಅವರಿಗೆ ಧನ್ಯವಾದ ತಿಳಿಸುತ್ತೇನೆ.ಯಡಿಯೂರಪ್ಪನವರು ಜೊತೆಗಿದ್ದಾರೆ ಅನ್ನೊದಕ್ಕಿಂದ ಇನ್ನೇನು ಧೈರ್ಯ ಬೇಕು.ನಮ್ಮಲ್ಲಿ ಗಾಂಜಾ ಮಾರಾಟ ಅತಿ ಹೆಚ್ಚಾಗ್ತಿದೆ.ಪೋಲಿಸ್ ಅಧಿಕಾರಿಗಳ ಜೊತೆ ಸೆಲ್ಫಿ ತಗೋತಾರೆ.ನಾನು ಹೇಳಿದ ಕೆಲಸ ಆಗಿಲ್ಲ ಅಂದ್ರೆ ಎಂಪಿ ಹತ್ರ ಕಾಲ್ ಮಾಡುಸ್ಲಾ ಎಂದು ಕೇಳ್ತಾರೆ.ನಾನು ಏನು ಮಾಡ್ಲಿ ಎಂದು ಗಂಭೀರ ಆರೋಪ ಮುನಿರತ್ನ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ