ಮುನಿಯಪ್ಪ ವಿರುದ್ಧದ ಮುನಿಸು ಶಮನ

ಭಾನುವಾರ, 9 ಏಪ್ರಿಲ್ 2023 (15:44 IST)
ಕಾಂಗ್ರೆಸ್​​ ಮುಖಂಡ K.H. ಮುನಿಯಪ್ಪಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡಿದ್ದು, ಇದಕ್ಕೆ ದೇವನಹಳ್ಳಿ ಕಾಂಗ್ರೆಸ್​ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ K.H ಮುನಿಯಪ್ಪ ತಮ್ಮ ವಿರುದ್ಧದ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮುನಿಯಪ್ಪ ಬಗ್ಗೆ ದೇವನಹಳ್ಳಿ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ರು. ಈ ಹಿನ್ನೆಲೆಯಲ್ಲಿ ಮುನಿಯಪ್ಪ ಸ್ಥಳೀಯ ಕಾಂಗ್ರೆಸ್ ನಾಯಕರಿಲ್ಲದೇ ತನ್ನ ಬೆಂಬಲಿಗರೊಂದಿಗೆ ಪ್ರಚಾರ ಕೈಗೊಂಡಿದ್ರು. ದೇವನಹಳ್ಳಿಯಿಂದ 13 ಆಕಾಂಕ್ಷಿಗಳು KPCCಗೆ ಅರ್ಜಿ ಸಲ್ಲಿಸಿದ್ದರು.. ಆದರೆ ಕಾಂಗ್ರೆಸ್​ ಹೈಕಮಾಂಡ್ K.H ಮುನಿಯಪ್ಪಗೆ ಮಣೆ ಹಾಕಿತ್ತು.. ಇದ್ರಿಂದಾಗಿ ​​​ಸ್ಥಳೀಯ ಕಾಂಗ್ರೆಸ್​ ಮುಖಂಡರು ಸಾಮೂಹಿಕ ರಾಜೀನಾಮೆ ಸಹ ಸಲ್ಲಿಸಿದ್ದರು.. ಇದೀಗ KHM ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಭಿನ್ನಮತ ಶಮನದಿಂದ ಕಾಂಗ್ರೆಸ್​ನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ