ಕೊಲೆ ಹಂತಕ ಆತ್ಮಹತ್ಯೆ

ಶನಿವಾರ, 17 ಸೆಪ್ಟಂಬರ್ 2022 (18:40 IST)
ತುಮಕೂರಿನಲ್ಲಿ ತನ್ನ ದೊಡ್ಡಮ್ಮನ ಮಗಳು ಸುಧಾಳನ್ನು ಕೊಲೆ ಮಾಡಿದ್ದ ಮಂಜುನಾಥ್ ಎಂಬ ವ್ಯಕ್ತಿ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರಿನ ಕೆರೆಸೂರಗೊಂಡನಹಳ್ಳಿಯ ನಿವಾಸಿಯಾದ ಮಂಜುನಾಥ್(26)  ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ಈಗ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್​​​​ನಲ್ಲಿ ಕೊಲೆ ವಿಚಾರವನ್ನು ಮಂಜುನಾಥ್ ಉಲ್ಲೇಖ ಮಾಡಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ