ಸಿಎಂ ಆಪ್ತ ಮರೀಗೌಡರಿಗೆ ಸಂಕಷ್ಟ..? ಡಿಸಿ ಶಿಖಾಗೆ ಧಮ್ಕಿ ಪ್ರಕರಣದಲ್ಲಿ ಚಾರ್ಜ್ ಶಿಟ್ ಸಲ್ಲಿಕೆ

ಗುರುವಾರ, 4 ಮೇ 2017 (11:52 IST)
ಜಿಲ್ಲಾಧಿಕಾರಿ ಶಿಖಾಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಸಿಎಂ ಆಪ್ತ ಎನ್ನಲಾಗುತ್ತಿರುವ ಮರೀಗೌಡ ಮತ್ತಿತರರ ವಿರುದ್ದ ಪೊಲಿಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮರೀಗೌಡ ಏಕವಚನದಲ್ಲಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದು ಸಾಬೀತಾಗಿದೆ ಎಂದು 45 ಪುಟಗಳ ಚಾರ್ಜ್ ಸೀಟ್`ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

 ಮರೀಗೌಡ,ಮೈಸೂರು ತಾಲೂಕು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಂಜುನಾಥ್, ಬಸವರಾಜು ವಿರುದ್ಧ ಐಪಿಸಿ ಸೆಕ್ಷನ್ 341, 353, 504 ಮತ್ತು 506ರಡಿ ದೋಷಾರೋಪ ದಾಖಲಿಸಲಾಗಿದೆ.

2016ರಲ್ಲಿ ಜುಲೈ 13ರಂದು ಯಾದಗಿರಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಮೈಸೂರು ತಹಸೀಲ್ದಾರ್ ನವೀನ್ ಜೋಸೆಫ್ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮರೀಗೌಡ ಗಲಾಟೆ ಮಾಡಿದ್ದರು. ಈ ಸಂಬಂಧ ತನಿಖೆ ಸಂದರ್ಭ ಸಿಕ್ಕಿ ಸಿಸಿಟಿವಿ ದೃಶ್ಯಾವಳಿ, ಆರೋಪಿಗಳು ನಿಂದಿಸಿದ ಧ್ವನಿಮುದ್ರಿಕೆ ಜೊತೆಗೆ 17 ಸಾಕ್ಷ್ಯಗಳನ್ನ ದೋಷಾರೋಪ ಪಟ್ಟಿ ಜೊತೆ ಮೈಸೂರಿನ ಸೆಷನ್ಸ್ ಕೋರ್ಟ್`ಗೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ