ಮೂರನೇ ಪತ್ನಿಯ ಮಗುವಿಗೆ ನಾಮಕರಣ: ಎರಡನೇ ಪತ್ನಿ ಮಾರಾಮಾರಿ

ಭಾನುವಾರ, 8 ಮೇ 2016 (13:22 IST)
ನಾನು ಜೀವಂತವಿದ್ದರೂ ಮೂರನೇ ಮದುವೆಯಾಗಿದ್ದೀಯಾ ಎಂದು ಎರಡನೇ ಪತ್ನಿ ಶಿವಮ್ಮ ಮೂರನೇ ಪತ್ನಿಯ ಮನೆಯ ಎದುರು ಬಂದು ಗಲಾಟೆ ಮಾಡಿದ ಘಟನೆ ಬೆಂಗಳೂರಿನಲ್ಲಿ  ಸಂಭವಿಸಿದೆ. ಬೆಂಗಳೂರಿನ ಯಲಹಂಕದ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಮಕೃಷ್ಣ ಅವರ ಮೊದಲ ಪತ್ನಿ ವಿಧಿವಶವರಾಗಿದ್ದರು. ಬಳಿಕ ರಾಮಕೃಷ್ಣ ಎರಡನೇ ಮದುವೆಯಾಗಿದ್ದರು.

ಆದರೂ ಎರಡನೇ ಪತ್ನಿಗೆ ಗೊತ್ತಾಗದ ಹಾಗೆ ರಾಮಕೃಷ್ಣ ಮೂರನೇ ಮದುವೆಯಾಗಿದ್ದರು. ಮೂರನೇ ಪತ್ನಿಯ ಮಗುವಿನ ನಾಮಕರಣ ನಡೆಯುತ್ತಿರುವ ವಿಷಯ ತಿಳಿದ ಎರಡನೇ ಪತ್ನಿ ಯಲಹಂಕದ ಕೆಂಚನಹಳ್ಳಿ ನಿವಾಸದ ಎದುರು ಬಂದು ಗಲಾಟೆ ಮಾಡಿದರು.

ತಾನು ಜೀವಂತವಿದ್ದರೂ ಮೂರನೇ ಮದುವೆಯಾಗಿರುವುದಕ್ಕೆ ಶಿವಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾನು ಬದುಕಿರಬೇಕಾದ್ರೆ ಇನ್ನೊಬ್ಬನನ್ನು ಮದುವೆಯಾಗ್ತೀಯೇನೋ, ನಿನಗೆ ನಾಚಿಕೆಯಾಗಲ್ವ, ಥೂ ನಿನ್ನ ಜನ್ಮಕ್ಕೆ ಎಂದು ಶಿವಮ್ಮ ಪತಿಯನ್ನು ವಾಚಾಮಗೋಚರವಾಗಿ ಬೈದರು.

ವೆಬ್ದುನಿಯಾವನ್ನು ಓದಿ