ನನ್ನ ತೇಜೋವದೆ ಮಾಡೋಕೆ ಚುನಾವಣೆ ಸಂದರ್ಭದಲ್ಲಿ ಇಂತಹ ಪುಸ್ತಕ ತರ್ತಿದಾರೆ- ಸಿದ್ದರಾಮಯ್ಯ

ಸೋಮವಾರ, 9 ಜನವರಿ 2023 (15:15 IST)
ಟಿಪ್ಪು ಹಾಗೂ ತಮ್ಮ ಬಗೆಗಿನ ಪುಸ್ತಕ ಬಿಡುಗಡೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಗೊತ್ತಿಲಪ್ಪ ನನಗೆ ಈಗ ನೋಡ್ರಿ ಕಾಮಾಲೆ  ರೋಗದವರರಿಗೆ ಎಲ್ಲಾ ಹಳದಿಯಾಗಿ ಕಾಣಿಸುತ್ತೆ.ಟಿಪ್ಪು ಬಗ್ಗೆ ಖಡ್ಗ ಹಿಡಿದು ಡ್ರೆಸ್  ಹಾಕಿಕೊಂಡವರು ಯಾರು ಯಡಿಯೂರಪ್ಪ ಶೋಭ ಕರಂದ್ಲಾಜೆ.ಟಿಪ್ಪು ಬಗ್ಗೆ ಕೃತಿಗೆ ಶೇಖ್ ಆಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು ಇದು ಇಬ್ಬಂದಿತನ ಅಲ್ವಾ..?ನನ್ನ ತೇಜೋವದೆ ಮಾಡೋಕೆ ಚುನಾವಣೆ ಸಂದರ್ಭದಲ್ಲಿ ಇಂತಹ ಪುಸ್ತಕ ತರ್ತಿದಾರೆ.ಇದು ಮಾನನಷ್ಟ ಮಾಡುವ ಉದ್ದೇಶ.ನೋಡೋಣ ಇದರ ಬಗ್ಗೆ ಕಾನೂನು ಪ್ರಕಾರ ಏನು ಮಾಡೋಕೆ ಆಗುತ್ತೆ  ಎಂದು ಸಿದ್ದರಾಮಯ್ಯ ಹೇಳಿದ್ರು.
 
ಅಲ್ಲದೇ ಕೋಲಾರ ಪ್ರವಾಸ ವಿಚಾರವಾಗಿಯೂ ಹೌದು ಕೋಲಾರಕ್ಕೆ ಹೋಗ್ತಾ ಇದೀನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ