ಮೋದಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿನಿಂದ ತೊಂದರೆ- ಆರ್.ಅಶೋಕ್

ಗುರುವಾರ, 1 ಫೆಬ್ರವರಿ 2018 (10:15 IST)

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬೆಂಗಳೂರಿಗೆ ಬರುವ ದಿನದಂದು ಟ್ರಾಫಿಕ್ ಜಾಮ್ ಹಾಗೂ ಕಲ್ಲು ತೂರಾಟ ನಡೆಸಲು ಕಾಂಗ್ರೆಸ್ ಕುಮ್ಮಕ್ಕಿಂದ ಸಿದ್ಧತೆ ನಡೆಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಬಂದ್ ನಡೆಸಿದ ಉದಾಹರಣೆಯಿಲ್ಲ. ಆದರೆ, ಕಾಂಗ್ರೆಸ್ ಪ್ರಾಯೋಜಿತ ಬಂದ್ ನಡೆಯುತ್ತಿದ್ದು, ಅವರು ಯಾವುದೇ ಕೋಟೆ ಕಟ್ಟಿದರೂ ಅದನ್ನು ಭೇದಿಸುತ್ತೇವೆ ಎಂದಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಸುಳ್ಳು ಹೇಳುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಆದ್ದರಿಂದ ಒವೈಸಿ ಜೊತೆಗೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ