ಗಡಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಡಿ.8ರಂದು
ಗಡಿ ಜಿಲ್ಲೆಯಲ್ಲಿ ಡಿಸೆಂಬರ್ 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿ ಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ನ್ಯಾಯಾಧೀಶರು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಡಿ.ಜೆ. ಬಸವರಾಜು, ಜಿಲ್ಲಾ ನ್ಯಾಯಧೀಶ ಬಸವರಾಜ ಮಾತನಾಡಿದರು. ಡಿಸೆಂಬರ್ 8 ರಂದು ಕಕ್ಷಿದಾರರು ನೇರವಾಗಿ ಜನತಾ ನ್ಯಾಯಾಲಯದಲ್ಲಿ ತಮ್ಮ ವ್ಯಾಜ್ಯಗಳನ್ನ ಬಗೆಹರಿಸಿಕೊಳ್ಳಬಹುದೆಂದರು.
ಅಕ್ಟೋಬರ್ 31 ವರಗೆ ದಾಖಲಾಗಿರುವ 8769 ಸಿವಿಲ್ ಹಾಗೂ 8629 ಕ್ರಿಮಿನಲ್ ಪ್ರಕರಣಗಳನ್ನ ಲೋಕ್ ಅದಾಲತ್ ಮೂಲಕ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದೆಂದು ಬಸವರಾಜು ವಿವರಿಸಿದರು.