ದ.ಕ. ಜಿಲ್ಲೆಯ ಶಿರಾಡಿಯಲ್ಲಿ ಓಡಾಡುತ್ತಿದ್ದ ಆ ಮೂವರು ಶಸ್ತ್ರಾಸ್ತ್ರಧಾರಿಗಳು ಯಾರು?!

ಮಂಗಳವಾರ, 16 ಜನವರಿ 2018 (10:06 IST)
ಮಂಗಳೂರು: ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಬಳಿ ನಕ್ಸಲರ ಹೆಜ್ಜೆ ಗುರುತು ಮೂಡಿದೆ. ಮೂವರು ಶಸ್ತ್ರಾಸ್ತ್ರಧಾರಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದಾರೆ.
 

ಶಿರಾಡಿ ಗ್ರಾಮದ ಬಳಿ ಶಂಕಿತರು ಕಂಡುಬಂದಿದ್ದಾರೆ ಎನ್ನಲಾಗಿದೆ. ಇವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರ, ಮೊಬೈಲ್, ಲ್ಯಾಪ್ ಟಾಪ್ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಪ್ರಾರಂಭಿಸಿದ್ದು, ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸಿದೆ. ಇದರೊಂದಿಗೆ ಮತ್ತೆ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಕಾರ್ಯಚಟುವಟಿಕೆ ಆರಂಭವಾಗಿರುವ ಅನುಮಾನ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ