ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಯಾವಾಗ ಬೇಕಾದ್ರೂ ಬೀಳಬಹುದು. ಕೆಲ ಸಣ್ಣಪುಟ್ಟ ಗೊಂದಲ, ಅಸಮಾಧಾನಗಳಿಂದಾಗಿ ದೋಸ್ತಿ ಸರಕಾರ ಹಣ್ಣಾಗಿದೆ. ಆ ಹಣ್ಣಿಗೆ ನಿಫಾ ವೈರಸ್ ಅಂಟಿದೆ. ಹೀಗಾಗಿ ಯಾವಾಗಬೇಕಾದ್ರೂ ಸರಕಾರ ಬೀಳಬಹುದು ಎಂದು ವ್ಯಂಗ್ಯವಾಡಿದರು.
ವಿದೇಶದಿಂದ ಕಪ್ಪು ಹಣ ತರುವ ಕುರಿತ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಸದಾನಂದಗೌಡರು,ಈ ವಿಷಯದಲ್ಲಿ ನಾವು ಪ್ರಯತ್ನ ಮಾಡಿದ್ದೇವೆ. ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಈವರೆಗೂ ಎಷ್ಟು ಕಪ್ಪುಹಣ ಬಂದಿದೆ ಎಂಬ ಬಗ್ಗೆ ಅಂಕಿ ಅಂಶ ಪಡೆದು ಹೇಳುವೆ ಎಂದು ಜಾರಿಕೊಂಡರು.
ಅಷ್ಟೇ ಅಲ್ಲ, ವಿದೇಶದಲ್ಲಿರುವ ಕಪ್ಪುಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ಜಮಾ ಮಾಡಿಲ್ಲ ಅನ್ನೋದು ದೊಡ್ಡ ಸಂಗತಿ ಅಲ್ಲ. ಕೇವಲ 5 ವರ್ಷದಲ್ಲಿ ತರೋದು ಕಷ್ಟ. ಕಪ್ಪು ಹಣ ನೇರವಾಗಿಜನರ ಖಾತೆಗೆ ಜಮೆ ಆಗಬೇಕು ಅಂತೇನು ಅಲ್ಲ.ಜನರಿಗೆ ಸರಕಾರದಿಂದ ಸಿಗುವ ಸೌಲಭ್ಯ ಕಪ್ಪು ಹಣದ್ದು ಎಂದು ಲೆಕ್ಕಾ ಹಾಕಿಕೊಳ್ಳಿ ಎನ್ನುವ ಮೂಲಕ ಸದಾನಂದಗೌಡ ಯೂಟರ್ನ್ ಹೊಡೆದರು.