ಲಿಂಗಾಯತ ಸಿಎಂ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ- ಸಿಎಂ

ಗುರುವಾರ, 20 ಏಪ್ರಿಲ್ 2023 (13:03 IST)
ಬಿಎಸ್‌ವೈ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಯಿತು.ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಹೇಗೆ ಕೌಂಟರ್ ಮಾಡಬೇಕು ಅಂತ ಚರ್ಚೆ ಮಾಡಲಾಗಿದೆ.ಧರ್ಮೆಂದ್ರ ಪ್ರಧಾನ್ ಕೂಡ ಸಭೆಯಲ್ಲಿ ಇದ್ದರೂ.ನಿಮ್ಮ ಭಾವನೆಗಳನ್ನು ಹೈಕಮಾಂಡ್‌ಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸಿಎಂ ಹೇಳಿದ್ರು.ಅಲ್ಲದೇ ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತರ ಸಭೆ ನಡೆದಿದ್ದು,ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಯ್ತು.ಕಾಂಗ್ರೆಸ್ ನವ್ರು ಅಪಪ್ರಚಾರ ಮಾಡ್ತಿದಾರೆ.ಇದನ್ನು ಹೇಗೆ ಕೌಂಟರ್ ಮಾಡಬೇಕು ಅಂತ ಚರ್ಚೆ ಆಯ್ತು.ಲಿಂಗಾಯತ ಸಿಎಂ ಬಗ್ಗೆನೂ ಕೆಲವರು ಸಲಹೆ ಕೊಟ್ರು.ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಇದ್ರು.ಅವರು ಹೈಕಮಾಂಡ್ ಗೆ ಸಭೆಯ ಭಾವನೆಗಳನ್ನು ತಿಳಿಸೋದಾಗಿ ಹೇಳಿದ್ರು.ಲಿಂಗಾಯತ ಸಿಎಂ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ