ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ : ನಿತ್ಯಾನಂದನ

ಶನಿವಾರ, 8 ಅಕ್ಟೋಬರ್ 2022 (07:02 IST)
ಬೆಂಗಳೂರು : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವುದು ಗೊತ್ತೇ ಇದೆ. ಈಗ ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ ಒಂದನ್ನು ನೀಡಿ ಸುದ್ದಿಯಾಗುತ್ತಿದೆ.

ಕೈಲಾಸದಲ್ಲಿ ಬಿಂದಾಸ್ ಆಗಿರುವ ಬಿಡದಿ ಸ್ವಾಮಿ ನಿತ್ಯಾನಂದ, ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾನೆ.

ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ವಿಶೇಷವಾದ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್ಎ ದಯಪಾಲಿಸುವುದಾಗಿ ತಿಳಿಸಿದ್ದು,

ಅಲ್ಲದೇ ಕೈಲಾಸದಲ್ಲಿ ಹೆರಿಗೆಯಾದರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತಾಗಿ ವೀಡಿಯೋ ಮೂಲಕ ವಿವರಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ