ಹುತಾತ್ಮ ಯೋಧರ ಕುಟುಂಬಸ್ಥರ ಜತೆ ನಮ್ಮ ಸರ್ಕಾರವಿದೆ-ಸಿಎಂ ಯಡಿಯೂರಪ್ಪ

ಸೋಮವಾರ, 16 ಡಿಸೆಂಬರ್ 2019 (11:14 IST)
ಬೆಂಗಳೂರು : ಹುತಾತ್ಮ ಯೋಧರ ಕುಟುಂಬಸ್ಥರ ಜತೆ ನಮ್ಮ ಸರ್ಕಾರವಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಧರ ಕುಟುಂಬಸ್ಥರಿಗೆ ಅಗತ್ಯ ಸೌಲಭ್ಯ ನೀಡುತ್ತೇವೆ. ಹುತಾತ್ಮ ಯೋಧರ ಕುಟುಂಬದ ಕಲ್ಯಾಣಕ್ಕೆ ನೀಡ್ತಿದ್ದ ಅನುದಾನ ಒಂದು ಕೋಟಿ ರೂ.ಗೆ ಹೆಚ್ಚಳ ಮಾಡಿದ್ದೇವೆ. ವೀರಚಕ್ರ, ಶೌರ್ಯಚಕ್ರಕ್ಕೆ ನೀಡುವ ಗೌರವಧನ ಹೆಚ್ಚಳ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸೇನಾ ಮೆಡಲ್ ಗೌರವ ಧನ 2 ಲಕ್ಷ ರೂನಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ