ಎಚ್ ಡಿ ಕೆ ಹಾಗೂ ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿ

ಸೋಮವಾರ, 29 ಮೇ 2023 (19:31 IST)
ಗ್ಯಾರಂಟಿ ಬಗ್ಗೆ ವಿಪಕ್ಷ ಗಳ ಟೀಕೆ ವಿಚಾರವಾಗಿ ಪರಮೇಶ್ವರ್ ಕಿಡಿಕಾರಿದ್ದಾರೆ.ಅಲ್ರೀ ಇವರಿಗೆ ಒಂದು ಸರ್ಕಾರ ಹೇಗೆ ನಡೆಯುತ್ತದೆ ಎಂಬುದೂ ಕೂಡ ಗೊತ್ತಿಲ್ವಾ.ಜನರೇ ಇವರಿಗೆ ಮನೆಯಲ್ಲಿ ಕೂರಿಸಿದರೂ ಬುದ್ದಿ ಬರ್ತಾ ಇಲ್ವಾ.ಅನಗತ್ಯ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ.ಜನರೇ ಬುದ್ದಿ ಕಲಿಸಿದರೂ ಬುದ್ದಿ ಬಂದಿಲ್ಲ ಇವರಿಗೆ,ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊಡ್ತೇವೆ ಅಂತ ಹೇಳಿದ್ದೇವೆ‌೧೦ ಕೆಜಿ ಹೊಂದಿಸಿಕೊಳ್ಳುವುದಕ್ಕಾದರೂ ಸಮಯ ಬೇಕಲ್ಲ.ಮಾನದಂಡಗಳು ವಿಪಕ್ಷ ಗಳು ಹೇಳಿದ ತರಹ ಏನೂ ಇರಲ್ಲ ಇಲ್ಲ.ನಾವು ಇನ್ನೂ ಗ್ಯಾರಂಟಿಗಳ ಬಗ್ಗೆ ನಿಯಮಗಳ ಬಗ್ಗೆ ಹೇಳಿಯೇ ಇಲ್ಲ.ಆಗಲೇ ಅವರು ಯಾಕೆ ಜನರನ್ನು ರಾಜಕೀಯ ಮಾಡ್ತಿದ್ದಾರೆ?ಎಂದು ಎಚ್ ಡಿ ಕೆ ಹಾಗೂ ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ