ಆ ದೇವಿ ಆಶೀರ್ವಾದ ಮಾಡಿದ್ರೆ ಜಾನುವಾರುಗಳಿಗೆ ಯಾವುದೇ ರೋಗ ಬರೋದಿಲ್ಲ!

ಬುಧವಾರ, 28 ನವೆಂಬರ್ 2018 (13:36 IST)
ಕಾರ್ತಿಕಮಾಸ ಪ್ರಯುಕ್ತ ಪಾರ್ವತಾಂಭ ಜಾತ್ರೆಯು ಭಕ್ತರ ಸಡಗರ ನಡುವೆ ನೆರವೇರಿತು.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ  ಅಲ್ಲಳ್ಳಿ ಪಾರ್ವತಾಂಭ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ಕಾರ್ತಿಕಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಪಾಲ್ಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು,  ಗ್ರಾಮ ದೇವತೆಯ ಮೆರವಣಿಗೆಯಲ್ಲಿ ತಮ್ಮ ಹರಕೆ ತೀರಿಸಿದರು. ದೇವಿಯ ಕೃಪೆಗೆ ಪಾತ್ರರಾದರು.

ಜಾನುವಾರುಗಳಿಗೆ ದೇವಿಯ ಬಳಿ ಪೂಜೆ ಮಾಡಿಸಿದರೆ ಉತ್ತಮ ಏಳ್ಗೆ ಹೊಂದುವುದಲ್ಲದೇ, ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಹೀಗಾಗಿ ವಿವಿಧ  ಗ್ರಾಮಗಳಿಂದ ಅಗಮಿಸಿದ್ದ ಜಾನುವಾರು ಮತ್ತು ಎತ್ತಿನ ಗಾಡಿಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ